Saturday, June 3, 2023
Homeಕವನಕವನ

ಕವನ

ಕುವೆಂಪು ಹೇಗೆ ನಾ ಮರೆಯಲಿ

ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರ ಕವಿಯು ಕುವೆಂಪು ತಾನೇ
ಹೇಗೆ ನಾನು ಮರೆಯಲಿ

ಕವಿಯೇ ನಿನ್ನ ಕವಿತೆಯಲ್ಲಿ
ವಿಶ್ವ ಮಾನವ ಸಂದೇಶ ಇರುವಲಿ
ನಾಡ ಗೀತೆ ಬರೆದ ಕವಿಯ
ಹೇಗೆ ನಾನು ಮರೆಯಲಿ

ಮಳೆಯಗಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲಿ
ಮಲೆನಾಡಿನ ಜನರ ಜೀವನ
ಕಣ್ಣ ಮುಂದೆ ತೇಲಿ ಬರುತಲಿ
ಹೇಗೆ ನಾನು ಮರೆಯಲಿ

ದೃಶ್ಯ ಕಾವ್ಯ ರಮ್ಯ ನಾಟಕ
ಜಲಗಾರ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ
ದಶ೯ನ ಭಾಗ್ಯ ನೀಡಿದ ಪ್ರಕೃತಿ ಕವಿಯ ಹೇಗೆ ನಾನು ಮರೆಯಲಿ

ಅಂಕುಶದ ಹಂಗಿಲ್ಲದೆ
ಎದೆಯ ಬೆಳಕಿನ ಆಸರೆಯಲ್ಲಿ
ಜಗಕೆ ಬೆಳಕಾಗುವ ಈ ಸನ್ಮತಿ ನನಗಿರಲಿ ಕವಿಯೇ ಜಗಕ್ಕಿರಲಿ


ಗೊರೂರು ಆನಂತರಾಜು
ಹಾಸನ

RELATED ARTICLES
- Advertisment -
Google search engine

Most Popular

Recent Comments