Tuesday, June 6, 2023
Homeರಾಜ್ಯಮೈಸೂರುಮತಚಲಾಯಿಸಿದ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ - ಮೈಸೂರು

ಮತಚಲಾಯಿಸಿದ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ – ಮೈಸೂರು

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಭರ್ಜರಿ ಮತದಾನ ನಡೆಯುತ್ತಿದೆ. ಮೈಸೂರು ಜಿಲ್ಲೆಯಲ್ಲಿಯೂ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದೇ ರೀತಿ ಮೈಸೂರು ಒಡೆಯರ್‌ ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಕೂಡ ಹಕ್ಕು ಚಲಾಯಿಸಲು ಮತಗಟ್ಟೆಗೆ ತೆರಳಿದ್ದರು. ಆದರೆ, ಅವರಿಗೆ ಮತದಾನ ಮಾಡಲು ಮತಗಟ್ಟೆ ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ.

ಯಾಕೆಂದರೆ, ಪ್ರಮೋದಾ ದೇವಿ ಅವರು ಗುರುತಿನ ಚೀಟಿ ತರದೇ ಮತದಾನಕ್ಕೆ ಬಂದಿದ್ದರಿಂದ ಅವರಿಗೆ ಮತದಾನಕ್ಕೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀಕಾಂತ ಶಾಲೆಯ ಮತ ಕೇಂದ್ರದಲ್ಲಿ ಮತದಾನ ಮಾಡಲು ಪ್ರಮೋದಾ ದೇವಿಯವರು ಬಂದಿದ್ದರು. ಆದರೆ, ಗುರುತಿನ ಚೀಟಿ ತಂದಿರದ ಕಾರಣ ಮತದಾನಕ್ಕೆ ಅವಕಾಶ ನೀಡಲಿಲ್ಲ. ಝೆರಾಕ್ಸ್‌ ಪ್ರತಿಯನ್ನು ನೀಡಿದರೂ ಚುನಾವಣಾ ಸಿಬ್ಬಂದಿ ಒಪ್ಪಿಲ್ಲ.

ಬಳಿಕ ಮೂಲ ಐಡಿ ಕಾರ್ಡ್‌ ಅನ್ನು ತರಿಸಿದ್ದಾರೆ. ಅಷ್ಟರವರೆಗೂ ಕಾರಿನಲ್ಲಿಯೇ ಪ್ರಮೋದಾ ದೇವಿ ಕುಳಿತಿದ್ದರು. ಮೂಲ ಗುರುತಿನಿ ಚೀಟಿ ಒದಗಿಸಿದ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಆ ನಂತರ ರಾಜಮಾತೆ ಪ್ರಮೋದಾ ದೇವಿ ಮತ ಚಲಾಯಿಸಿದ್ದಾರೆ.
ಇನ್ನು, ಮತದಾನದ ಬಳಿಕ ಮಾತನಾಡಿದ ಪ್ರಮೋದಾ ದೇವಿ ಅವರು, ಮೊದಲೆಲ್ಲಾ ಪಕ್ಷದಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಆಫೀಸ್‌ನಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ‌ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಎಂದು ಸಿಬ್ಬಂದಿ ಹೇಳಿದರು. ಆಫೀಸ್‌ನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ‌ ತಡ ಆಯ್ತು ಎಂದು ಹೇಳಿದರು.

ಗುರುತಿನ ಚೀಟಿಯನ್ನು ಸಾಫ್ಟ್‌ ಕಾಪಿಯಲ್ಲಿ ಹಾಕಿದ್ದರು. ಡಿಜಿಟಲ್ ಕಾಪಿಗೆ ಅನುಮತಿ ಇಲ್ಲ ಎಂದು ಗೊತ್ತಿರಲಿಲ್ಲ. ಯುವಕರು ತಮ್ಮ ಭಾವನೆಯನ್ನು ಮತದಾನದ ಮೂಲಕ ವ್ಯಕ್ತಪಡಿಸಬೇಕು. ಅಲ್ಲದೇ ನಮ್ಮ ಧ್ವನಿ ಕೇಳಲ್ಲ ಅಂದ್ರೆ ಏನೂ ಮಾಡೊಕೆ ಆಗಲ್ಲ. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿ ಇದ್ದರೂ ಅದನ್ನ ಇಲ್ಲಿ ಬಂದು ವ್ಯಕ್ತಪಡಿಸಿ, ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ ಎಂದರು.

ರಾಜ್ಯಾದ್ಯಂತ ಬಿರುಸಿನ ಮತದಾನ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಮತಗಟ್ಟೆಗೆ ಬಂದು ಜನ ಮತ ಚಲಾಯಿಸುತ್ತಿದ್ದಾರೆ. ಮೇ 13ರಂದು ಚುನಾವಣಾ ಫಲಿತಾಂಶ ಬರಲಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ರಾಜ್ಯಾದ್ಯಂತ ಶೇ.20.94ರಷ್ಟು ಮತದಾನ ಆಗಿತ್ತು.

RELATED ARTICLES
- Advertisment -
Google search engine

Most Popular

Recent Comments